ಕೃಪಾಶಂಕರ

ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ
ಮಂತ್ರಿ ಪದ ಬರಲಿಲ್ಲ
ಜನಮತಗಳಿಸಿ
ನಿನ್ನ ಮರ್ಯಾದೆ ಉಳಿಸಿದರೂ
ಪದ ಪಡೆಯುವ ಆಸೆ ಭರವಸೆ ಇದ್ದರೂ
ಮೇಲಿನವರು ಕಡೆಗಣಿಸಿದರು.
ಇದು ನಿನಗೆ ಸಂದ
ಎಣಿಸದೆಯೆ ಬಂದ
ಬಹುಮಾನ!
ಅಹವಾಲು ತಲುಪಲಿಲ್ಲ
ಒಲೈಕೆ- ಫಲಿಸಲಿಲ್ಲ
ಗೈದ ಕುಕೃತಿ – ಅನಧಿಕೃತ
ತಿರುಗಿದ ಬಾಣವಾಯಿತು-
ಇಡು ಶಂಕರನಲ್ಲಿ ನಂಬಿಕೆ
ಮುಂದೊಂದು ದಿನ
ಮನೆಮಂತ್ರಿಯಾಗುವೆ ಪುನಃ
ಶಂಕರ ನಿನ್ನ ಕೃಪಾಕಟಾಕ್ಷದ
ಅಡಿಯಲ್ಲಿ
ನಾನು ಬಂಜೆಯಾದೆ-
ಏಕಾಯಿತು ಹೀಗೆ-ಹೀನಾಯ ತಗಾದೆ
ನಾನು ತಿಳಿಯದಾದೆ.
ಧರ್ಮದಾರುಣವಾಯಿತು
ಕರ್ಮಕಾರಣವಾಯಿತು
ಯುಗ ಯುಗದಲ್ಲಿಯೂ
ಧರ್ಮರಕ್ಷಣೆಗೆ ಸಂಭವಿಸುವೆನೆಂದು
ಇತ್ತ ಆಶ್ವಾಸನೆ ಎಲ್ಲಿ ಹೋಯಿತು
ಮಠಪೀಟ ಧನ ದಾಹದಿಂದ
ನೀನು ಮೇಲೇಳಲಿಲ್ಲ
ಎಲ್ಲರಂತಲ್ಲ ನೀನೆಂದು
ಜಗದೊಡೆಯ ಬಲ್ಲಹನೆಂದು
ಚರಣಧೂಳಿಯನು ಹಣೆಗೆ ಹಚ್ಚಿಯಾಯಿತು
ನೀನು ಮೇಲೇಳಲಿಲ್ಲ – ಮಾನಹಾನಿಗಳ ಡಾವಪೇಚಿನಲ್ಲಿ
ಮನುವಾಗಿಯೆ ಉಳಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾ ತಾಯೆ ಬಾ
Next post ಇಂಥ ವೇಗದೋಟದಲ್ಲಿ ನೋಟ ಸಾಧ್ಯವಾ?

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys